ಸುಭಾಷಿತಾಮೃತ ೨
33.
ಕರಾಗ್ರೇ ವಸತೇ ಲಕ್ಷ್ಮೀಃ
ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತಾ ಗೌರೀ
ಪ್ರಭಾತೇ ಕರದರ್ಶನಮ್ ||
(ಮುಂಜಾನೇ ಎದ್ದ ತಕ್ಷಣ ನಮ್ಮ
ಹಸ್ತವನ್ನು ನೋಡಿಕೊಂಡು ಹೇಳಬೇಕಾದ ಮಂತ್ರ)
ಹಸ್ತದ ತುದಿಯಲ್ಲಿ ಲಕ್ಷ್ಮಿ,
ಮಧ್ಯದಲ್ಲಿ ಸರಸ್ವತಿ, ಮೂಲದಲ್ಲಿ ಗೌರಿ ಇವರು ವಾಸಮಾಡುತ್ತಾರೆ. ಆದ್ದರಿಂದ ಪ್ರಾತಃಕಾಲದಲ್ಲಿ ಹಸ್ತವನ್ನು
ಮೊದಲು ನೋಡಬೇಕು.
34.
ಸಮುದ್ರವಸನೇ ದೇವಿ
ಪರ್ವತಸ್ತನಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ
ಪಾದಸ್ಪರ್ಶಂ ಕ್ಷಮಸ್ವ ಮೇ ||
(ಪ್ರತಿದಿನ ಬೆಳಿಗ್ಗೆ ಕಾಲನ್ನು
ಹಾಸಿಗೆಯಿಂದ ನೆಲಕ್ಕೆ ಇಡುವ ಮೊದಲು ಹೇಳಬೇಕಾದ ಮಂತ್ರ)
ಹೇ ವಿಷ್ಣುಪತ್ನಿಯಾದ ಭೂಮಾತೆಯೇ
! ಸಮುದ್ರವೇ ನಿನ್ನ ವಸ್ತ್ರ. ಪರ್ವತಗಳೇ ನಿನ್ನ ಸ್ತನಗಳು. ನಿನಗೆ ನಮಸ್ಕಾರಗಳು. ನನ್ನ ಪಾದಸ್ಪರ್ಶಕ್ಕಾಗಿ
ನನ್ನನ್ನು ಕ್ಷಮಿಸು.
35.
ಗಂಗೇ ಚ ಯಮುನೇ ಚೈವ
ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ
ಜಲೇಽಸ್ಮಿನ್ ಸನ್ನಿಧಿಂ ಕುರು
||
(ಪ್ರತಿದಿನ ಸ್ನಾನ ಮಾಡುವಾಗ
ಹೇಳಬೇಕಾದ ಮಂತ್ರ)
ಗಂಗೆ, ಯಮುನೆ, ಗೋದಾವರಿ, ಸರಸ್ವತಿ,
ನರ್ಮದೆ, ಸಿಂಧು ಮತ್ತು ಕಾವೇರಿ ಮಾತೆಯರೇ, ಈ ನೀರಿನಲ್ಲಿ ನೀವು ಬಂದು ನೆಲಸಿ ಅನುಗ್ರಹಿಸಿ.
36.
ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು
| ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ
||
ವಾಸಿಸುವ ಭೂಮಿ ಒಂದೇ. ಎಲ್ಲರೂ
ಕುಡಿಯುವ ನೀರೂ ಒಂದೇ. ಸುಡುವ ಬೆಂಕಿಯೂ ಎರಡಿಲ್ಲ. ಹೀಗಿರುವಾಗ ಆ ಜಾತಿ, ಈ ಜಾತಿ ಎಂಬ ಭೇದಭಾವ ಸರಿಯಲ್ಲ.
37.
ಎಲುವಿಲ್ಲ ನಾಲಗೆಗೆ
ಬಲವಿಲ್ಲ ಬಡವಂಗೆ
ತೊಲೆಕಂಭವಿಲ್ಲ ಗಗನಕ್ಕೆ | ದೇವರಲಿ
ಕುಲಭೇದವಿಲ್ಲ - ಸರ್ವಜ್ಞ ||
ನಾಲಿಗೆಗೆ ಎಲುಬಿಲ್ಲ. ಬಡವನಿಗೆ
ಶಕ್ತಿ ಇಲ್ಲ. ಆಕಾಶಕ್ಕೆ ಆಧಾರ ಕಂಭವಿಲ್ಲ. ದೇವರಿಗೆ ಆ ಕುಲ, ಈ ಕುಲ ಎಂಬ ಭೇಧವಿಲ್ಲ.
38.
ಆರಯ್ದು ನಡೆವವನು
ಆರಯ್ದು ನುಡಿವವನು
ಆರಯ್ದು ಅಡಿಯನಿಡುವವನು | ಲೋಕಕ್ಕೆ
ಆರಾಧ್ಯನಕ್ಕು - ಸರ್ವಜ್ಞ ||
ಎಚ್ಚರಿಕೆಯಿಂದ ವ್ಯವಹರಿಸುವವನು,
ಆಲೋಚಿಸಿ ಮಾತನಾಡುವವನು ಮತ್ತು ಆಯ್ದು ಹೆಜ್ಜೆಯಿಡುವವನು ಲೋಕಕ್ಕೆ ಆರಾಧ್ಯನಾಗುತ್ತಾನೆ.
39.
ಆಲಸ್ಯಂ ಹಿ ಮನುಷ್ಯಾಣಾಂ
ಶರೀರಸ್ಥೋ ಮಹಾನ್ ರಿಪುಃ |
ನಾಸ್ತುದ್ಯಮ ಸಮೋ ಬಂಧುಃ
ಕೃತ್ವಾ ಯಂ ನಾವಸೀದತಿ ||
ಆಲಸ್ಯವೆಂಬುದು ಮನುಷ್ಯನ ಶರೀರರನ್ನು
ಹೊಕ್ಕಿರುವ ಭಯಂಕರ ಶತ್ರು. ಯಾವುದನ್ನು ನಂಬಿ ಯಾರೂ ನಾಶವಾಗಿಲ್ಲವೋ ಅಂತಹ ಪರಿಶ್ರಮಕ್ಕೆ ಸಮನಾದ ಬಾಂಧವರೇ
ಇಲ್ಲ.
40.
ಉದ್ಯಮೇನ ಹಿ ಸಿದ್ಧ್ಯಂತಿ
ಕಾರ್ಯಾಣಿ ನ ಮನೋರಥೈಃ |
ನ ಹಿ ಸುಪ್ತಸ್ಯ ಸಿಂಹಸ್ಯ
ಪ್ರವಿಶಂತಿ ಮುಖೇ ಮೃಗಾಃ ||
ಕೇವಲ ಆಸೆ ಪಟ್ಟ ಮಾತ್ರಕ್ಕೆ
ಏನೂ ಆಗದು. ಪ್ರಯತ್ನಿಸಿದರೆ ಮಾತ್ರ ಕಾರ್ಯವು ಸಿದ್ಧಿಸುತ್ತದೆ. (ಆಹಾರಕ್ಕಾಗಿ ಪ್ರಯತ್ನಿಸದೇ) ಸುಮ್ಮನೆ
ಮಲಗಿರುವ ಸಿಂಹದ ಬಾಯಿಗೆ ಮೃಗಗಳು ತಾವಾಗಿಯೇ ಬಂದು ಪ್ರವೇಶಿಸುವುದಿಲ್ಲ ತಾನೇ ?
41.
ಗಚ್ಛನ್ ಪಿಪೀಲಿಕೋ ಯಾತಿ
ಯೋಜನಾನಾಂ ತತೈರಪಿ |
ಅಗಚ್ಛನ್ ವೈನತೇಯೋಽಪಿ
ಪದಮೇಕಂ ನ ಗಚ್ಛತಿ ||
ಚಲಿಸುತ್ತಿದ್ದರೆ ಇರುವೆಯಾದರೂ
ನೂರಾರು ಮೈಲಿ ಸಾಗಬಹುದು. ಚಲಿಸದೆ ಸುಮ್ಮನಿದ್ದರೆ ಗರುಡನೇ ಆದರೂ ಒಂದು ಹೆಜ್ಜೆಯೂ ಮುಂದೆ ಸಾಗದು.
42.
ಎನಗಿಂತ ಕಿರಿಯರಾರಿಲ್ಲ.
ಶಿವಭಕ್ತರಿಗಿಂತ ಹಿರಿಯರಾರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನ
ಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿವ್ಯ
||
ನನಗಿಂತ ಕಿರಿಯರು (ಕ್ಷುದ್ರರು)
ಯಾರೂ ಇಲ್ಲ. ಹಾಗೆಯೇ ಶಿವಭಕ್ತರಿಗಿಂತ ಹಿರಿಯರು (ಶ್ರೇಷ್ಠರು) ಯಾರೂ ಇಲ್ಲ (ಈ ಮಾತನ್ನು) ಹೇ ಕೂಡಲ
ಸಂಗಮೇಶ್ವರ, ನಿಮ್ಮ ಪಾದಸಾಕ್ಷಿಯಾಗಿಯೂ ನನ್ನ ಮನಸ್ಸಿನ ಸಾಕ್ಷಿಯಾಗಿಯೂ ಹೇಳುತ್ತಿರುವೆ. ನನ್ನನ್ನು
ನಾನು ಪರೀಕ್ಷಿಸಿಕೊಳ್ಳಲು ನನಗೆ ಇದೇ ಕಠಿಣ ಒರೆಗಲ್ಲು.
43.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು
ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ
ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು
ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ
ಶುದ್ಧಿ
ಇದೇ ಕೂಡಲಸಂಗಮ ದೇವರನೊಲಿಸುವ
ಪರಿ ||
ಕಳ್ಳತನ ಮಾಡದಿರು, ಹಿಂಸೆ ಮಾಡದಿರು.
ಸುಳ್ಳೂ ಹೇಳದಿರು. ಕೋಪಿಸಿಕೊಳ್ಳದಿರು. ಅನ್ಯರನ್ನು ತಿರಸ್ಕರಿಸದಿರು. ತನ್ನನ್ನು ಹೊಗಳಿಕೊಳ್ಳದಿರು.
ಇತರರನ್ನು ನಿಂದಿಸದಿರು. ಇದೇ ಅಂತರ್ಬಾಹ್ಯ ಶುದ್ಧಿ. ಇದೇ ದೇವರನ್ನೊಲಿಸುವ ಮಾರ್ಗ.
44.
ಪ್ರೀತಿಯ ಮಗನಾಗು
ನೀತೀಲಿ ಪ್ರಭುವಾಗು
ಖ್ಯಾತೀಲಿ ಧರ್ಮಜನಂತಾಗು | ಕಂದಯ್ಯ
ಜ್ಯೋತಿಯಾಗು ನೀ ಮನೆ ಬೆಳಗು
||
ಹೆತ್ತವರಿಗೆ ಮೆಚ್ಚಿನ ಮಗನಾಗು.
ನೀತಿ ಮಾರ್ಗದಲ್ಲಿ ಮುನ್ನಡೆಯುತ್ತ ಧರ್ಮರಾಯನಂತೆ ಕೀರ್ತಿಗಳಿಸಿ, ಕುಲದೀಪಕನಾಗು.
45.
ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನಬೇಡ |
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡಾ ||
ಹತ್ತು ಕಡೆ ಒಂದೊಂದಡಿ ಅಗೆದರೆ
ಎಲ್ಲೂ ನೀರು ಬರುವುದಿಲ್ಲ. ಅದರ ಬದಲು ಒಂದೇ ಕಡೆ ಹತ್ತು ಅಡಿ ಅಗೆದರೆ ನೀರು ಸಿಗುವುದು.
46.
ಅಹಿಂಸಾ ಸತ್ಯಮಸ್ತೇಯಂ
ಶೌಚಮಿಂದ್ರಿಯನಿಗ್ರಹಃ |
ದಾನಂ ದಮೋ ದಯಾ ಕ್ಷಾಂತಿಃ
ಸರ್ವೇಷಾಂ ಧರ್ಮಸಾಧನಂ ||
ಅಹಿಂಸೆ, ಸತ್ಯ, ಕಳ್ಳತನ ಮಾದದಿರುವುದು,
ನೈರ್ಮಲ್ಯ, ಇಂದ್ರಿಯನಿಗ್ರಹ, ದಾನ, ದಯೆ, ಶಿಸ್ತು, ತಾಳ್ಮೆ ಇವು ಎಲ್ಲರಿಗೂ ಧರ್ಮಸಾಧನ.
47.
ಮಾತೃವತ್ ಪರದಾರೇಷು
ಪರದ್ರವ್ಯೇಷು ಲೋಷ್ಠವತ್ |
ಆತ್ಮವತ್ ಸರ್ವಭೂತೇಷು
ಯಃ ಪಶ್ಯತಿ ಸ ಪಂಡಿತಃ ||
ಪರಸ್ತ್ರೀಯರನ್ನು ತಾಯಿಯಂತೆ,
ಪರಧನವನ್ನು ಮಣ್ಣಿನ ಹೆಂಟೆಯಂತೆ, ಸರ್ವ ಜೀವಿಗಳನ್ನು ತನ್ನಂತೆಯೇ ಭಾವಿಸಿ ನಡೆವವನೇ ನಿಜವಾದ ಜ್ಞಾನಿ.
48.
ಯಥಾ ಚಿತ್ತಂ ತಥಾ ವಾಚಃ
ಯಥಾ ವಾಚಸ್ತಥಾ ಕ್ರಿಯಾಃ |
ಚಿತ್ತೇ ವಾಚಿ ಕ್ರಿಯಾಯಾಂ ಚ
ಮಹತಾಂ ಏಕರೂಪತಾ ||
ಆಲೋಚನೆಯಂತೆ ಮಾತು, ಮಾತಿನಂತೆ
ನಡವಳಿಕೆ - ಮನಸ್ಸು, ಮಾತು, ನಡವಳಿಕೆಗಳಲ್ಲಿ ಮಹಾತ್ಮರು ಒಂದೇ ತೆರನಾಗಿರುತ್ತಾರೆ.
49.
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧುಬಳಗ |
ಸತ್ಯವಾಕ್ಯಕೆ ತಪ್ಪ ನಡೆದರೆ
ಮೆಚ್ಚನಾ ಪರಮಾತ್ಮನು ||
50.
ಆವಿನದು ನೊರೆಹಾಲನೊಲ್ಲೆನು ದೇವಲೋಕದ
ಸುಧೆಯನೊಲ್ಲೆನು
ದೇವಿ ನಿನ್ನಯ ನಾಮದದ್ಭುತ ರುಚಿಯನರಿತಿಹೆನು
|
ಪಾವನಳೆ ನಿನ್ನಂಘ್ರಿಕಮಲದ ಸೇವೆಯದು
ದೊರೆತಿಹುದು ತಾಯೇ
ಶ್ರೀವರನ ಕೃಪೆಯಿಂದ ಮತ್ತಿನ್ನೇನು
ಬೇಡೆನಗೆ ||
ತಾಯಿ (ಭಾರತಮಾತೆ) ನಿನ್ನ ಹೆಸರಿನ
ಅದ್ಭುತ ರುಚಿಯನ್ನರಿತ ನನಗೆ ಹಸುವಿನ (ಆವು=ಹಸು) ನೊರೆಹಾಲು, ದೇವಲೋಕದ ಅಮೃತ ಯಾವುದೂ ರುಚಿಸದು.
ಭಗವಂತನ ಕೃಪೆಯಿಂದ ನಿನ್ನ ಪಾದಕಮಲಗಳ (ಅಂಘ್ರಿ=ಪಾದ) ಸೇವೆಯ ಭಾಗ್ಯ ದೊರಕಿರುವಾಗ ನನಗೆ ಬೇರೆ ಯಾವ
ಭಾಗ್ಯವೂ ಬೇಡ.
51.
ಇಟ್ಟರೆ ಸಗಣಿಯಾದ, ತಟ್ಟಿದರೆ
ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
|
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ ?
ಗೋವು ಕೇಳುತ್ತದೆ - ನನ್ನ ಸಗಣಿಯಿಂದ
ಅದೆಷ್ಟು ಪ್ರಯೋಜನ! ತಟ್ಟಿ ಬೆರಣಿ ಮಾಡಬಹುದು. ಸುಟ್ಟು ವಿಭೂತಿ ಮಾಡಿ ಹಣೆಗೆ ಹಚ್ಚಬಹುದು. ಗೊಬ್ಬರವಾಗಿಯೂ
ಬಳಸಬಹುದು. ಓ ಮಾನವಾ, ನಿನ್ನಿಂದ ಏನು ಉಪಯೋಗ?
52.
ಇರಲೆನಗೆ ಕರಕನ್ನವುಣ್ಣಲು ಬರಿಯ
ನೆಲವಿರಲೆನಗೆ ಮಲಗಲು
ಹರಕು ಬಟ್ಟೆಗಳೆನ್ನ ಮೈಯನು ಮುಚ್ಚಲಿರಲೆನಗೆ
|
ಮುರುಕು ಗುಡಿಸಲು ಇರಲಿ ವಾಸಕೆ
ಸಿರಿಯರಸ ಮತ್ತೇನ ಬೇಡೆನು
ಭರತ ಭೂಮಿಯೊಳಿರುವುದೇ ಎನಗೊಂದು
ಸುಖವಿಹುದು ||
ಊಟ ಮಾಡಲು ಸೀದ ಹೋದ (ಕರಕಲಾದ)
ಅನ್ನ, ಮಲಗಲು ಬರಿಯ ನೆಲ, ಮೈಯ್ಯನು ಮುಚ್ಚಲು ಹರಕಲು ಬಟ್ಟೆಗಳು, ವಾಸಿಸಲು ಮುರುಕು ಗುಡಿಸಲೇ ಇದ್ದರೂ
ಭಾರತ ದೇಶದಲ್ಲಿರುವ ಅವಕಾಶ ದೊರೆತರೆ ಸಾಕು. ನಾನು ಬೇರೆ ಯಾವ ಸುಖವನ್ನೂ ಬೇಡುವುದಿಲ್ಲ.
53.
ಧರ್ಮ ಏವ ಹತೋ ಹಂತಿ
ಧರ್ಮೋ ರಕ್ಷತಿ ರಕ್ಷಿತಃ |
ತಸ್ಮಾದ್ಧರ್ಮೋ ನ ಹಂತವ್ಯಃ
ಮಾ ನೋ ಧರ್ಮೋ ಹತೋವಧೀತ್ ||
ಧರ್ಮವನ್ನು ಮೀರಿದರೆ ಅದು ನಮಗೆ
ಹಾನಿಯನ್ನುಂಟುಮಾಡುತ್ತದೆ. ಧರ್ಮವನ್ನು ಆಚರಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಆದುದರಿಂದ ಧರ್ಮವನ್ನು
ಮೀರಬಾರದು. ಧರ್ಮವನ್ನು ಮೀರಿ ಹಾಳಾಗುವುದು ಬೇಡ.
54.
ಆಚಾರ್ಯಾತ್ ಪಾದಮಾದತ್ತೇ
ಪಾದಂ ಶಿಷ್ಯಃ ಸ್ವಮೇಧಯಾ |
ಕಾಲೇನ್ ಪಾದಮಾದತ್ತೇ
ಪಾದಂ ಸಬ್ರಹ್ಮಚಾರಿಭಿಃ ||
ಶಿಷ್ಯನು ಆಚಾರ್ಯರಿಂದ ವಿದ್ಯೆಯ
ಕಾಲು ಭಾಗವನ್ನೂ, ತನ್ನ ಬುದ್ಧಿಶಕ್ತಿಯಿಂದ ಕಾಲುಭಾಗವನ್ನೂ, ಸಹಪಾಠಿಗಳಿಂದ ಕಾಲುಭಾಗವನ್ನೂ, ಕಾಲಕ್ರಮೇಣ
ಅನುಭವದಿಂದ ಕಾಳುಭಾಗವನ್ನೂ ತಿಳಿದುಕೊಳ್ಳುತ್ತಾನೆ.
55.
ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ದುಹಂತಿ ಗಾವಃ |
ಪರೋಪಕಾರಾಯ ಬಹಂತಿ ನದ್ಯಃ
ಪರೋಪಕಾರಾರ್ಥಮಿದಂ ಶರೀರಂ ||
ಮರಗಳು ಕೊಡುವ ಹಣ್ಣು, ದನಗಳು
ಕೊಡುವ ಹಾಲು, ನದಿಗಳಲ್ಲಿ ಹರಿಯುವ ನೀರು ಬೇರೆಯವರ ಉಪಕಾರಕ್ಕಾಗಿಯೇ ಇರುವಂತೆ ಈ ಶರೀರವೂ ಪರೋಪಕಾರಕ್ಕಾಗಿಯೇ
ಇರುವಂತಾಗಲಿ.
56.
ಭರತಖಂಡದ ಹಿತವೆ ಎನ್ನ ಹಿತ ಎಂದು
ಭರತಮಾತೆಯ ಮತವೆ ಎನ್ನ ಮತ ಎಂದು
ಭಾರತಾಂಬೆಯ ಸುತರೆ ಸೋದರರು ಎಂದು
ಭಾರತಾಂಬೆಯ ಮುಕ್ತಿ ಮುಕ್ತಿ ಎನಗೆಂದು
||
ಭಾರತದ ಹಿತವೇ ನನ್ನ ಹಿತ. ಭರತಮಾತೆಯ
ವಿಚಾರವೇ ಎನ್ನ ವಿಚಾರ. ಆಕೆಯ ಮಕ್ಕಳೆಲ್ಲರೂ ನನ್ನ ಸೋದರರು. ಆಕೆಯ ಕಷ್ಟಗಳೆಲ್ಲ ದೂರವಾಗುವುದೇ ನನಗೆ
ದೊರೆಯುವ ಮುಕ್ತಿ ಎಂಬ ಭಾವನೆಯಿಂದ ಈ ಕಾರ್ಯದಲ್ಲಿ ಮುನ್ನುಗ್ಗು.
57.
ಆತ್ಮವಚ್ಯುತವೆಂದು ಜನ್ಮಗಳು ಬಹವೆಂದು
ಮೃತ್ಯು ನಶ್ವರವೆಂದು ಭಾರತಿಗೆ
ಜಯವೆಂದು |
ನಡೆ ಮುಂದೆ ನಡೆ ಮುಂದೆ ನುಗ್ಗಿ
ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ
ನಡೆ ಮುಂದೆ ||
ನಮಗೆ ಜನ್ಮಗಳು ಅನೇಕ. ಆತ್ಮಕ್ಕೆ
ಸಾವಿಲ್ಲ. ಸಾವು ಮೃತ್ಯುವಿಗೆ, ಜಯವು ಭಾರತಿಗೆ ಎಂದು ಭಾವಿಸಿ ಮುಂದೆ ನಡೆ. ಯಾವ ಕಷ್ಟಕ್ಕೂ ಜಗ್ಗದೆ
ರಾಷ್ಟ್ರಕಾರ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗು.
58.
ಹೋರಾಡು ಬೀಳ್ವನ್ನಮೊಬ್ಬಂಟಿಯಾದೊಡೆ
ಧೀರಪಥವನೆ ಬೆದಕು ಸಕಲ ಸಮಯದೊಳು
ದೂರದಲ್ಲಿ ಗೊಣಗುತ್ತ ಬಾಳ್ವ ಬಾಳ್ಗೇನು
ಬೆಲೆ
ಹೋರಿ ಸತ್ವವ ಮೆರೆಸು - ಮಂಕುತಿಮ್ಮ
||
ಒಬ್ಬಂಟಿಗನೇ ಆದರೂ ಬೀಳುವ ತನಕ
ಹೋರಾಡು. ಯಾವಗಲೂ ದಿಟ್ಟತನದಿಂದ ಕೂಡಿದ ದಾರಿಯನ್ನೇ ಹುಡುಕು. ಗೊಣಗುಟ್ಟುತ್ತಾ ದೂರನಿಂತು ಬಾಳುವ
ಜೀವನಕ್ಕೇನು ಬೆಲೆ ? ಹೋರಾಡಿ ಸಾಮರ್ಥ್ಯವನ್ನು ಪ್ರಕಟಪಡಿಸು.
60.
ಆತ್ಮಶುದ್ಧಿಯ ತರದ ಆಚಾರವೇತಕ್ಕೆ
ಭಾಂಡಶುದ್ಧಿಯು ಇರದ ಪಾಕವಲ್ತೆ
ಚಿತ್ತಶುದ್ಧಿಯು ಇರದ ಶಿವಪೂಜೆ
ಏತಕ್ಕೆ
ವಿಶ್ವದಾ ಅಭಿರಾಮ ವೇಮ ಕೇಳು
||
ಆತ್ಮಕ್ಕೆ ಸಂಸ್ಕಾರ ನೀಡದ ಆಚಾರವಿಧಿಗಳು
ಅಶುದ್ಧ ಪಾತ್ರೆಯಲ್ಲಿ ತಯಾರಿಸಿದ ಅಡುಗೆಯಂತೆ ವ್ಯರ್ಥ. ಹಾಗೆಯೇ ನಾವು ಮಾಡುವ ಭಗವಂತನ ಪೂಜೆಯು ಮನಃಶುದ್ಧಿಯನ್ನು
ತರದಿದ್ದಲ್ಲಿ ಅದು ವ್ಯರ್ಥವೇ ಸರಿ.